ಮುದಗಲ್ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಹನುಮಂತ ನಾಯಕ ಆಯ್ಕೆ

Spread the love

ಮುದಗಲ್ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಹನುಮಂತ ನಾಯಕ ಆಯ್ಕೆ

ಪತ್ರಕರ್ತರೆಂದರೆ ಕೆಲವೊಬ್ಬರಿಗೆ ದ್ವೇಷ ವಿರೋಧ.. ಪತ್ರಿಕಾ ವಲಯಲ್ಲಿಯೂ ಕೂಡ ಬಹಳ ಶತ್ರುಗಳಿರುತ್ತಾರೆ.. ವರದಿಗಾರರ ಮೇಲೆ ಸಾಕಷ್ಟು ರೌಡಿ ಕೇಡಿಗಳು ಅನ್ಯಾಯ ಮಾಡಲು ಹಾಗೂ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿರುತ್ತಾರೆ..ಪತ್ರಕರ್ತರು ಹಾಗೂ ವರದಿಗಾರರರ ಮೇಲೆ ಸಾಕಷ್ಟು ವಿರೋಧ.. ಹಲ್ಲೆ..!! ಕೆಲವು ಪತ್ರಕರ್ತರು ಮತ್ತು ವರದಿಗಾರರನ್ನು ಕೇವಲವಾಗಿ ನೋಡುತ್ತಾರೆ ಪತ್ರಕರ್ತರು ಹಾಗೂ ವರದಿಗಾರರು ತಮ್ಮ ಜೀವನವನ್ನು ಭಯದೊಂದಿಗೆ ಹೋರಾಡುತ್ತಾ ಪ್ರಾಣ ಮುಡಿಪಾಗಿಟ್ಟು ಹಗಲಿರುಳು ಆತಂಕದಲ್ಲಿ ಜೀವನವನ್ನು ಸಾಗಿಸುತ್ತಾರೆ. ಅದರಲ್ಲೂ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ ಹೀಗೆ ಹಲವು ವ್ಯತ್ಯಾಸಗಳು ಬೇರೆ..ಪತ್ರಕರ್ತರ ಕೀಳಿರಿಮೆಗೆ ಕಾರಣ..! ಇದರ ಮದ್ಯಯು ಸಮಾಜದಲ್ಲಿ ಗಂಟ್ಟಿತನ ತೋರಿಸಿ ಪತ್ರಿಕೆಯ ಮಹತ್ವದ ಬಗ್ಗೆ ಹಗಲಿರುಳು ಶ್ರಮಿಸುವ ನನ್ನೆ ಆತ್ಮೀಯ ಪತ್ರಕರ್ತನಾದ ಹನುಮಂತ ನಾಯಕರನ್ನು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್  ಪಟ್ಟಣದ ಬ್ರಹ್ಮಶ್ರೀ ಹೊಟೇಲ್ ನಲ್ಲಿ  ಕಾರ್ಯ ನಿರತ ಪತ್ರಕರ್ತರ ಸಂಘದ ಅಡಿಯಲ್ಲಿ ಮುದಗಲ್ ಪತ್ರಕರ್ತ ಸಂಘದ  ಪದಾಧಿಕಾರಿಗಳನ್ನು ಸೋಮುವಾರ ಆಯ್ಕೆ ಮಾಡಲಾಯಿತು. ಈ ಆಯ್ಕೆ ಪ್ರಕ್ರೀಯೆಯಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷರಾಗಿ ಸ್ಟಾರ್ ಆಫ್ ರಾಯಚೂರು ಪತ್ರಕರ್ತರು, ಸ್ವಂತ ಮುದಗಲ್ ಎಕ್ಸ್ ಪ್ರೆಸ್ ಪತ್ರಿಕೆ ಸಂಪಾದಕರಾದ ಹನುಮಂತ ನಾಯಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ   ಪತ್ರಕರ್ತರಾದ   ಶಿವರಾಜ ಸುಕಂದ,   ಶಶಿಧರ ಕಂಚಿಮಠ, ದೇವಣ್ಣ ಕೋಡಿಹಾಳ ,  ಚಂದ್ರಶೇಖರ ಗಂಗಾವತಿ,  ನಾಗರಾಜ ಎಸ್ , ಮಡಿವಾಳರ,ಅಮ್ಜದ್ ಕಂದಗಲ್ , ಬಸವರಾಜ ಹೂನೂರು, ರಾಘವೇಂದ್ರ ಗುಮಾಸ್ತೆ , ಡಾ. ಶರಣಪ್ಪ ಆನೇಹೊಸೂರು, ಮೈನುದ್ದೀನ್ ಭಂಡಾರಿ ಇದ್ದರು. ಇನ್ನೂ ಸಮಾಜದ ಸಾರ್ವಜನೀಕರ ಏಳಿಗೆಗೆ, ಹಗಲಿರುಳು ಶ್ರಮಿಸಲಿ, ಜೊತೆಗೆ ಎತ್ತರದ ಹುದ್ದೆಗೆ ಸಾಗಲೆಂದು  ಶುಭವಾಗಲೆಂದು ಆರೈಸುವ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗ.. ವರದಿ – ಸಂಪಾದಕೀಯ

Leave a Reply

Your email address will not be published. Required fields are marked *